ಅನಾಗರಿಕ ವರ್ತನೆ

ಏರ್ ಇಂಡಿಯಾ ವಿಮಾನದಲ್ಲಿ ಇತ್ತೀಚೆಗೆ ನಡೆದ ಘಟನೆ ಮಹಿಳೆಯರನ್ನು ಮಾತ್ರವಲ್ಲ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸಹ ಪ್ರಯಾಣಿಕ ನೊಬ್ಬ ಕುಡಿದ ಮತ್ತಿನಲ್ಲಿ ವಯಸ್ಸಾದ ಮಹಿಳೆ ಮೇಲೆ ಏಕಾಏಕಿ ಮೂತ್ರಿಸುತ್ತಿರ ಬೇಕಾದರೆ ಆ ಮಹಿಳೆಗೆ ಹೇಗಾಗಿರಬೇಡ? ಯಾರೂ ಊಹಿಲಸಾಧ್ಯವಾದ ಘಟನೆ ನಡೆದಾಗ ಆ ಮಹಿಳೆ ಅದೆಷ್ಟು ಆಘಾತಕ್ಕೊಳ ಗಾಗಿರಬೇಕು? ನಾವು ನಮ್ಮದೇ ಮೂತ್ರವನ್ನು ಮುಟ್ಟಿಕೊಳ್ಳಲು ಅಸಹ್ಯ ಪಡುತ್ತೇವೆ ಅಂತಹದರಲ್ಲಿ ಬೇರೆಯವರ ಮೂತ್ರ ನಮ್ಮ ಮೇಲೆ ಬಿದ್ದರೆ ಹೇಗಾಗಬೇಕು ?
ಆ ಯುವಕನ ತಾಯಿಯ ಮೇಲೆ ಬೇರೆ ಯಾರೋ ಒಬ್ಬರು ಮೂತ್ರಿ ಸಿದರೆ ಹೇಗಾಗುತ್ತದೆ ಎಂದು ಅವನು ಯೋಚಿಸಬೇಕು. ಅದು ಬಿಟ್ಟು ಹತ್ತು ಹದಿನೈದು ಸಾವಿರ ಬಿಸಾಕಿ ಕ್ಷಮೆ ಕೇಳಿ ಬಿಟ್ಟರೆ ಸಾಕೆ? ಆಕೆ ಪಟ್ಟ ಆಘಾತ, ಯಾತನೆ, ಮುಜುಗರ, ಅಸಹ್ಯಕ್ಕೆ ಅಷ್ಟೇ ಬೆಲೆಯೇ? ಅಷ್ಟು ಸಾಲದು ಎಂದು ವಿಮಾನದಲ್ಲಿದ್ದ ಸಿಬ್ಬಂದಿ ವರ್ಗದವರೂ ಕ್ರೂರವಾಗಿ ನಡೆದುಕೊಂಡರು. ಆ ಸೀಟನ್ನು ಸ್ವಚ್ಛ ಗೊಳಿಸಿ ಮತ್ತೆ ಅದರಲ್ಲೇ ಕೂರುವಂತೆ ಮಾಡಿದರು. ಬೇರೆ ಯಾವ ಸೀಟು ಸಿಗಲಿಲ್ಲವೆ, ಫರ್ಸ್ಟ್ ಕ್ಲಾಸ್ ನಲ್ಲಿ ನಾಲ್ಕು ಸೀಟುಗಳು ಖಾಲಿ ಇದ್ದವು. ಆಕೆಯನ್ನು ಅಲ್ಲಿ ಕೂರಿಸ ಬಹುದಿತ್ತಲ್ಲವೆ? ಮಾನವೀಯತೆ ಮರೆತು ಬಿಟ್ಟರೆ ಸಿಬ್ಬಂದಿಗಳು? ಮೈಮೇಲೆ ನೀರು ಚೆಲ್ಲಿದಷ್ಟು ಹಗುರವಾಗಿ ತೆಗೆದುಕೊಂಡರಲ್ಲ ವಿಮಾನದ ಸಿಬ್ಬಂದಿಗಳು!

ಇಷ್ಟೆಲ್ಲ ಸಾಲದು ಎಂದು ಆತನ ತಂದೆ ನ್ಯೂಸ್ ಚಾನಲ್ ಗಳಲ್ಲಿ ನೀಡುವ ಅಸಂಬದ್ಧ ಹೇಳಿಕೆ ಕೇಳುತ್ತಿದ್ದರೆ ಮೈಯೆಲ್ಲ ಉರಿದು ಹೋಯಿತು. ಆಕೆ ಬೇಕೆಂದೇ ಇದೆಲ್ಲ ಮಾಡುತ್ತಿದ್ದಾರಂತೆ. ಮಗ ಮೂತ್ರಿ ಸಿದ ಎಂದು ಯಾವ ಸಾಕ್ಷಿ ಇದೆ? ದುಡ್ಡಿ ಗೋಸ್ಕರ ಮಾಡುತ್ತಿದ್ದಾರೆ ಎಂದೆಲ್ಲ ಹೇಳುತ್ತಿದ್ದ ಆ ಕದೀಮ, ಪುತ್ರ ಮೋಹದ ತಂದೆಗೆ ಕಪಾಳಕ್ಕೆ ಬಾರಿಸುವಷ್ಟು ಸಿಟ್ಟು ಬಂದಿತ್ತು. ಲಾಂಡ್ರಿ ಖರ್ಚು ಎಂದು ದುಡ್ಡು ಕೊಟ್ಟಿದ್ದಾರೆ ಬೇರೇನು ಬೇಕು ಎನ್ನುತ್ತಿದ್ದ. ಲಾಂಡ್ರಿ ದುಡ್ಡು ಯಾರಿಗೆ ಬೇಕು? ಆಕೆ ಕೂಡ ಬ್ಯುಸಿನೆಸ್ ಕ್ಲಾಸ್ ನಲ್ಲೇ ಪ್ರಯಾಣಿಸುತ್ತಿದ್ದರು ಅಂದರೆ ಅವರಿಗೆ ಲಾಂಡ್ರಿ ದುಡ್ಡು ಕೇಳುವಷ್ಟು ಗತಿ ಕೆಟ್ಟಿಲ್ಲ. ಅದು ಬಿಡಿ, ಆ ಬಟ್ಟೆಗಳನ್ನು ಮತ್ತೆ ಆಕೆ ಧರಿಸುತ್ತಾರೆ ಎಂದು ಯಾವ ನಂಬಿಕೆಯ ಮೇಲೆ ಹೇಳಿದ ಅವನು. ಯಾರಾದರೂ ಅಂತಹ ಕೆಟ್ಟ ಘಟನೆಯನ್ನು ನೆನಪಿಸುವ ಬಟ್ಟೆಗಳನ್ನು ಮತ್ತೆ ಧರಿಸುತ್ತಾರಾ? ಆಕೆಗಾದ ಅನ್ಯಾಯಕ್ಕೆ ನ್ಯಾಯ ಕೇಳುವ ಹಕ್ಕೂ ಇಲ್ಲವೇ ?

ಪೈಲಟ್ ವಿಮಾನ ಇಳಿಸಿದ ಮೇಲೆ ನಿಲ್ದಾಣದಲ್ಲಿ ದೂರು ದಾಖಲಿಸಿ ಬೇಕಿತ್ತು, ಅದನ್ನೂ ಕೂಡ ಮಾಡಿಲ್ಲ, ಬಲವಂತದಿಂದ ರಾಜಿ ಮಾಡಿಸಿ ಕಳುಹಿಸಿ ಬಿಟ್ಟರು. ಮೂತ್ರಿಸಿದ್ದನ್ನು ಮೈಮೇಲೆ ನೀರು ಎರಚಿದಷ್ಟು ಹಗುರವಾಗಿ ತೆಗೆದುಕೊಂಡಿದ್ದು ಎಷ್ಟು ಸರಿ ? ಆಕೆ ಒಂದು ತಿಂಗಳ ನಂತರ ದೂರು ದಾಖಲಿಸಿದ್ದಾರೆ ಎಂದರೆ ಆಕೆಗೆ ಈ ಆಘಾತದಿಂದ ಚೇತರಿಸಿ ಕೊಳ್ಳಲು ಒಂದು ತಿಂಗಳೇ ಬೇಕಾಯಿತು ಎಂದಾಯಿತು. ಹಾಗಾದರೆ ಅದೆಷ್ಟು ಆಘಾತ ವಾಗಿರಬೇಕು ನೀವೇ ಊಹಿಸಿ? ಇನ್ನು ಆಕೆ ಜನ್ಮದಲ್ಲೇ ಒಬ್ಬರೇ ಪ್ರಯಾಣಿಸಲು ಹೆದರಬಹುದು. ಪ್ರಯಾಣ ಯಾಕೆ ಮನೆ ಬಿಟ್ಟು ಹೊರಗೆ ಹೋಗಲು ಸಹ ಭಯ ಪಡಬಹುದು. ಆಕೆ ಮಾತ್ರವಲ್ಲ ಉಳಿದ ಮಹಿಳೆಯರು ಕೂಡ ಒಬ್ಬರೇ ಪ್ರಯಾಣಿಸಲು ಹೆದರಬಹುದು. ಅದಕ್ಕೆಲ್ಲ ಯಾರು ಹೊಣೆ?

ಅಷ್ಟೇ ಅಲ್ಲ ಆತ ಈಗ ತಾನು ಆಕೆಯ ಮೇಲೆ ಮೂತ್ರ ಮಾಡಿದ್ದೆ ಇಲ್ಲ ಎಂದು ಕೋರ್ಟ್ ನಲ್ಲಿ ವಾದಿಸುತ್ತಿದ್ದಾನಂತೆ! ಅವನ ವಕೀಲೆ ಸ್ವತಃ ಮಹಿಳೆಯಾಗಿ, ‘ಆಕೆ ತಾನೇ ಮೂತ್ರ ಮಾಡಿಕೊಂಡಿದ್ದಾಳೆ, ಆ ಮಹಿಳೆ ಒಬ್ಬ ಕಥಕ್ ನೃತ್ಯ ಕಲಾವಿದೆ ಹಾಗಾಗಿ ಅಂತಹವರಿಗೆ ಒಮ್ಮೊಮ್ಮೆ ಹೀಗಾಗುತ್ತದೆ’ ಎಂದು ವಾದಿಸಿದರಂತೆ! ಆಕೆ ಸ್ವತಃ ಮಹಿಳೆಯಾಗಿ ಹೀಗೆ ಹೇಳಬಹುದೇ? ಒಬ್ಬ ಮಹಿಳೆ ಹೇಗೆ ತನ್ನ ಮೇಲೆ ಎರಚಿದಂತೆ ಮೂತ್ರ ಮಾಡಿಕೊಳ್ಳಬಹುದು? ಎಷ್ಟು ಹಾಸ್ಯಾಸ್ಪದ ಅಲ್ಲವೇ? ಆಕೆ ಬಹುದೊಡ್ಡ ವಕೀಲೆಯಾಗಿ ಅಷ್ಟೂ ಸಾಮಾನ್ಯ ಜ್ಞಾನ ಇಲ್ಲವೇ ? ಆಕೆಯ ಮೇಲೆ ಮೂತ್ರ ಮಾಡಿದ್ದು ಸಾಲದು ಎಂದು ಈಗ ಆಕೆಯ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಕೆಸರೆರೆಚುತ್ತಿದ್ದಾರೆ. ಎಷ್ಟೊಂದು ಅಮಾನವೀಯ ಅಲ್ಲವೇ ? ಆತ ದುಡ್ಡಿನ ಬಲದಿಂದ ಈ ಪ್ರಕರಣವನ್ನು ಸಂಪೂರ್ಣವಾಗಿ ತಿರುಚಲು ಬಹುದು ಅಥವಾ ಮುಚ್ಚಿ ಹೋಗಲು ಬಹುದು.
ಆತನ ಬಾಸ್ ಆತನನ್ನು ಕೆಲಸದಿಂದ ವಜಾ ಮಾಡಿದ್ದು ಸರಿಯಾಗಿಯೇ ಇದೆ ಇಲ್ಲದಿದ್ದರೆ ಆತ ವಿಮಾನದಲ್ಲಿ ಮಾಡಿದ್ದನ್ನು ಕಚೇರಿಯಲ್ಲಿ ಕೂಡ ಮಾಡಬಹುದು! ಹಾಗಾಗಿ ಅವನಿಗೆ ತಕ್ಕ ಶಿಕ್ಷೆ ಆಗಲೇಬೇಕು. ಮಾತ್ರವಲ್ಲ
ಆತನಿಗೆ ಕಠಿಣ ಶಿಕ್ಷೆ ಯಾಗಬೇಕು. ಈ ಪ್ರಕರಣವನ್ನು ಕೋರ್ಟ್ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಇಂತಹ ಹಲವು ಘಟನೆಗಳು ನಡೆಯಬಹುದು. ಅಷ್ಟೇ ಯಾಕೆ? ಇನ್ನು ಮುಂದೆ ಬಸ್, ರೈಲುಗಳಲ್ಲೂ ಸಹ ನಡೆಯಬಹುದು.ಅಷ್ಟು ಮಾತ್ರವಲ್ಲ ಇನ್ನು ವಿದೇಶಿ ಪ್ರಯಾಣಿಕರು ಭಾರತೀಯ ಪುರುಷರ ಜೊತೆ ಪ್ರಯಾಣಿಸಲು ನಿರಾಕರಿಸಬಹುದು. ಭಾರತೀಯ ಪುರುಷರನ್ನು ಅವಮಾನಿಸಲೂ ಬಹುದು.

ಒಬ್ಬನ ಕೆಟ್ಟ ವರ್ತನೆಯಿಂದಾಗಿ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ. ಇಂತಹ ವರ್ತನೆಗೆ ಅವರ ಪೋಷಕರು ಕೂಡ ಕಾರಣರಾಗಿರುತ್ತಾರೆ. ಗಂಡು ಮಕ್ಕಳು ಏನು ಮಾಡಿದರೂ ಸರಿ, ಹೇಗೆ ಮಾಡಿದರೂ ಸರಿ ಎನ್ನುವ ಧೋರಣೆ. ಗಲ್ಲಿ ಗಲ್ಲಿಗಳಲ್ಲಿ ಇಂತಹ ಪುರುಷರು ಬಹಿರ್ದೆಸೆಗೆ ನಿಲ್ಲುವುದನ್ನು ಈಗಲೂ ಕಾಣಬಹುದು.
ಈಗಾಗಲೇ ಜಾಲತಾಣಗಳಲ್ಲಿ ಹಲವು ವಿದೇಶಿಯರು ಭಾರತೀಯ ಪುರುಷರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಭಾರತೀಯ ಪುರುಷರು ಮನೆಗೆ ಬಂದವರು ಲಾನ್ ನಲ್ಲಿ ಮೂತ್ರ ಮಾಡಿದ್ದಾರೆ,ಪಾತ್ರೆಗಳಲ್ಲಿ ಮೂತ್ರ ಮಾಡಿದ್ದಾರೆ, ಬಾಟಲಿಗಳಲ್ಲಿ ಮೂತ್ರ ಮಾಡಿದ್ದಾರೆ ಎಂದೆಲ್ಲ ಹೇಳುತ್ತಿದ್ದಾರೆ. ಅದೆಲ್ಲ ಎಷ್ಟು ನಿಜವೋ ಎಷ್ಟು ಸುಳ್ಳೋ ಯಾರಿಗೆ ಗೊತ್ತು. ಆದರೆ ಮರ್ಯಾದೆ ಹೋಗುವುದು ಭಾರತೀಯ ಪುರುಷರದ್ದು. ಇನ್ನು ಪರಿಹಾರ ಎಷ್ಟು ಕೊಟ್ಟರೂ ಅದನ್ನು ಆಕೆ ಸ್ವೀಕರಿಸುವುದು ಸಂದೇಹ ಯಾಕೆಂದರೆ ಆ ಹಣ ಎಲ್ಲಿಂದ ಬಂತು ಎಂಬ ವಿಷಯ ಆಕೆಯನ್ನು ಆ ಘಟನೆ ಯ ಬಗ್ಗೆ ಯಾವಾಗಲೂ ನೆನಪಿಸುತ್ತಿರುತ್ತದೆ.
ಅವನಿಗೆ ಸರಿಯಾದ ಶಿಕ್ಷೆ ಎಂದರೆ ಒಂದು ವಾರ ಅವನ ಮೇಲೆ ಮೂತ್ರ ಎರಚಿ ಗಂಟೆಗಟ್ಟಲೆ ಹಾಗೇ ಕೂರುವಂತೆ ಮಾಡಬೇಕು. ಇದರಿಂದಲಾದರೂ ಅವನಿಗೆ ಬುದ್ಧಿ ಬರಬಹುದು. ಇನ್ನು ಮುಂದೆ ಅಂತಹ ವರ್ತನೆ ತೋರಿಸಲು ಅಂತಹ ವಿಕೃತ ಮನಸ್ಸಿನವರು ಹೆದರಬೇಕು.